ಸೆಪ್ಟಂಬರ್ 2025- ಪ್ರತಿಭಾ ಪತ್ರಿಕೆ
ಪ್ರತಿಭಾ ಪತ್ರಿಕೆ - ಸೆಪ್ಟಂಬರ್ 2025 ಸಂಪಾರಕರ ಮಾತು ರಂಗೋಲಿ ಸ್ಪರ್ಧೆಗೆ 10 ಜನರು ರಂಗೋಲಿಗಳನ್ನು ಕಳಿಸಿದ್ದೀರಿ. 20 ಜನ ಕಳಿಸಬಹುದು ಅಂತ ಅಂದುಕೊಂಡಿದ್ದೆ. ಹಾಗೇನೆ, ಬಹುಮಾನಿತ ಸ್ಪರ್ಧೆ ಒಂದೇ ಅಲ್ಲದೆ ಇನ್ನು ಅನೇಕ ಸ್ಪರ್ಧೆಗಳು ಸಂಚಿಕೆಯಲ್ಲಿ ಇರುತ್ತವೆ. ಅದನ್ನು ಅಷ್ಟಾಗಿ ಜನರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ದಯವಿಟ್ಟು ಬಹುಮಾನವಿರಲಿ ಇಲ್ಲದಿರಲಿ ಎಲ್ಲ ಸ್ಪರ್ಧೆಗಳಲ್ಲು ಭಾಗವಹಿಸಿ. ಎಂದಿನಂತೆ ನಿಮ್ಮ ಕೆ ವಿ ಜಯರಾಮ್ ಅವರು ಅನೇಕ ಚಿತ್ರಗಳನ್ನು ಕಳಿಸಿದ್ದಾರೆ. ಹಾಗೆ ಒಂದು ವಿಶೇಷ ಎಂದರೆ ಬಾಲಕ ಆದಿತ್ಯ ಅದ್ಬುತವಾಗಿ ಗಣೇಶನ ಪೆನ್ಸಿಲ್ ಡ್ರಾಯಿಂಗ್ ಅನ್ನು ಬರೆದಿದ್ದಾನೆ. ಮೊದಲೇ ಹೇಳಿದಂತೆ ಇನ್ನು ಮುಂದೆ ವಿಶೇಷ ವ್ಯಕ್ತಿ ಅನ್ನುವುದರ ಬದಲಾಗಿ ವ್ಯಕ್ತಿ ಪರಿಚಯ ಎಂದು ಮಾರ್ಪಡಿಸುತ್ತಿದ್ದೇನೆ ಏಕೆಂದರೆ ಅನೇಕರು ತಾವೇನು ವಿಶೇಷ ವ್ಯಕ್ತಿಯಲ್ಲ ಎಂದು ಹಿಂಜರಿದ್ದರು. ಆದ್ದರಿಂದ ಈ ಮಾರ್ಪಾಡನ್ನು ಮಾಡಲಾಗಿದೆ. ಈ ಸಲದ ಸ್ಪರ್ಧೆ ದಯವಿಟ್ಟು ತಾವೆಲ್ಲ ಭಾಗವಹಿಸಲೇಬೇಕೆಂದು ನನ್ನ ಭಾವನೆ ಮುಖ್ಯವಾಗಿ ರಾಮಾಯಣ ಮಹಾಭಾರತಗಳಲ್ಲಿ ಆಸಕ್ತಿಯುಳ್ಳವರು ಹಿರಿಯರು ದಯವಿಟ್ಟು ಭಾಗವಹಿಸಿ ಏನಾದರೂ ಹೊಸದು ಮಾಡಬೇಕೆಂಬ ಆಲೋಚನೆಯಿಂದ ನಾನು ಈ...