July post
ಸಂಪಾದಕರ ಬರಹ ಪ್ರಿಯ ಓದುಗರೇ ಈ ಸಲದ ಸಂಚಿಕೆಯನ್ನು , ಒಂದೇ ಉದ್ದನೆಯ ಪುಟದಲ್ಲಿ ಮಾಡಲಾಗಿದೆ. "ಈ ಸಂಚಿಕೆಯಲ್ಲಿ" ಎಂಬ ವಿಭಾಗದಲ್ಲಿರುವ ಎಲ್ಲ ಹೆಡ್ಡಿಂಗ್ ಗಳನ್ನು ನೀವು ಒತ್ತಿ, ನೇರವಾಗಿ ಯಾವುದೇ ವಿಭಾಗಕ್ಕೆ ಹೋಗಬಹುದು ಮತ್ತು ಬಲಗಡೆ ಮೊಬೈಲ್ನ ಕೆಳಗಡೆ ಕಾಣುವ ಕೆಂಪುಬಣ್ಣದ ಆರೋ ಮಾರ್ಕ್ ಒತ್ತಿ ದರೆ ಮತ್ತೆ ಅದು ಮುಖಪುಟಕ್ಕೆ ಹೋಗುತ್ತದೆ . ಹೀಗೆ ಮಾಡದೆ ನೀವು ಸ್ಕ್ರಾಲ್ ಮಾಡುತ್ತಾ ಪೂರ್ತಿ ಸಂಚಿಕೆಯನ್ನು ಕೂಡ ಓದಬಹುದು. ಈ ಸಲದ ಕೈಬರಹದ ಸ್ಪರ್ಧೆ ಬಹಳ ಸುಲಭವಾಗಿದೆ ದಯವಿಟ್ಟು ಎಲ್ಲರೂ ಭಾಗವಹಿಸುತ್ತೀರೆಂದು ನಂಬಿದ್ದೇನೆ. ಕಳೆದ ಸಂಚಿಕೆಯಲ್ಲಿ ಎಲ್ಲ ಲೇಖನಗಳಿಗೆ ರೇಟಿಂಗ್ ಮಾಡಲು ಹೇಳಿದ್ದೆ ಅದರಲ್ಲಿಲ್ಲ ಅತ್ಯಂತ ಹೆಚ್ಚಿನ ರೇಟಿಂಗ್ ಬಂದಿರುವುದು ಕುಮಾರಿ ತೀಕ್ಷ್ಣ ಅವರ ಚಿತ್ರಕಲೆಗೆ ಅವರಿಗೆ ನನ್ನ ಅಭಿನಂದನೆಗಳು. - ಜಯರಾಂ ಎ ಎಸ್ - ಸಂಪಾದಕರು ಸ್ಪರ್ಧಾ ವಿಭಾಗ ರಾಮಾಯಣ ಮಹಾಭಾರತದ ಕಾಲದಲ್ಲಿ ಮೊಬೈಲ್ ಇದ್ದಿದ್ದರೆ - ಸ್ಪರ್ಧೆಯ ಉತ್ತರಗಳು. 1) ಡಾ || ಚಂದ್ರಶೇಖರ ರಾವ್ 2) ಶ್ರೀ ಜಯರಾಂ ಕೆ ವಿ ರಾಮಾಯಣದಲ್ಲಿ ಮೊಬೈಲ್ ಫೋನ್ ಬಳಕೆ ರಾಮಾಯಣದಲ್ಲಿ ತಂತ್ರಜ್ಞಾನವು ಮುಂದುವರೆದಿತ್ತು...