ಏಪ್ರಿಲ್ test

ಪ್ರತಿಭಾ ಪತ್ರಿಕೆ

[ez-toc]

ಸಂಪಾದಕರ ಮಾತು 

ನಾನು ಕಳೆದ ಏಪ್ರಿಲ್ ನಲ್ಲಿ ಪತ್ರಿಕೆಯನ್ನು  ಪ್ರಾರಂಭಿಸಿ, ಮೇ 1ನೇ ತಾರೀಕು ಪ್ರಕಟಿಸಿದೆ ಅಂದರೆ ಈ ಸಂಚಿಕೆ ಹಾಕಿದರೆ ಒಂದು ವರ್ಷ ವಾಗುತ್ತದೆ. 

ಓ ! ಆಗಲೇ ಒಂದು ವರ್ಷ ಆಯಿತೇ? ಅಥವಾ ಏಪ್ರಿಲ್ ಫೂಲಾ ?  ಎಂದು ನಿಮಗೆ ಅನಿಸುತ್ತಿರಬೇಕು.  ಇದು ಏಪ್ರಿಲ್ ಫೂಲ್ ಅಲ್ಲ . ನಿಜವಾಗಿ ಒಂದು ವರ್ಷ ಆಗಿದೆ! 

ಈ ಸಲದ ಪತ್ರಿಕೆ  ಸ್ವಲ್ಪ ಹೊಸ ವಿನ್ಯಾಸದಲ್ಲಿ ಮಾಡಿದ್ದೇನೆ. ವೆಬ್ಸೈಟ್ ಮೂಲಕ ಮಾಡಿದ್ದೇನೆ ನಿಮಗೆ ಇತರ ಅನೇಕ ಪೇಜ್ ಗಳು ಮೇಲೆ ಕಾಣುತ್ತಿರುತ್ತವೆ. ಅದು ಗೊತ್ತಿದ್ದವರು ಮಾತ್ರ ಆ ಪೇಜುಗಳನ್ನು ಒತ್ತಿ, ಮತ್ತೆ ವಾಪಸ್ ಬರಬಹುದು ಅದು ಇನ್ನೂ ತುಂಬಾ ಅಪ್ಡೇಟ್ ಆಗಬೇಕಾಗಿರುವುದರಿಂದ ಈಗ ಸದ್ಯಕ್ಕೆ ಈ ಪೋಸ್ಟ್ ಒಂದೇ ಡಿಟೇಲಾಗಿ ಹಾಕಿದ್ದೇನೆ. ಮುಂದೆ ಇನ್ನೂ ಅನೇಕ ಹೊಸ ಹೊಸ ವಿನ್ಯಾಸಗಳನ್ನ ಪ್ರಯತ್ನಿಸಿ ಇನ್ನೂ ಉತ್ತಮವಾದ ಓದಲು ಅತಿ ಸುಲಭವಾದ ಮ್ಯಾಗ್ಜಿನ್ ಮಾಡಲು ಉದ್ದೇಶಿಸುತ್ತೇನೆ. ಈ ಸಲದ ವಿಶೇಷ ವ್ಯಕ್ತಿ ನನ್ನ ಗೆಳೆಯ ಎನ್‌ಪಿ ಶರ್ಮ. ಇವರು ಮೆಟ್ರೋದ ಬಿಎಮ್ಆರ್‌ಸಿಎಲ್ ಅಲ್ಲಿ ಡೈರೆಕ್ಟರ್ ಆಗಿ ನಿವೃತ್ತಿ ಹೊಂದಿದರು. ಎಲ್ಲ ಕೆಲಸಗಳನ್ನು ಮೆಟ್ರೋ ಶುರುವಾದಾಗೆನಿಂದ ಇವರು ಮಾಡಿದ್ದಾರೆ. ದಯವಿಟ್ಟು ಕೂಲಂಕುಶವಾಗಿ ಇದನ್ನು ಓದಿ.


ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೊಸ ರೀತಿಯ ಪತ್ರಿಕೆ

"ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೊಸ ರೀತಿಯ ಪತ್ರಿಕೆ "  

 ಕಳೆದ ಸಂಚಿಕೆಯಲ್ಲಿ ಬಹುಮಾನ ಪಡೆದವರು 

ಶ್ರೀ ಎಸ್ ವಿಠ್ಠಲ ರಾವ್ 

 
 

ಕುಮಾರಿ ವಿಭಾ ಆತ್ರೇಯ 

ಈವರಿಬ್ಬರಿಗೂ ಅಭಿನಂದನೆಗಳು 

ವಿಶೇಷ ಸುದ್ದಿ 

ನಮ್ಮ ಬಡಾವಣೆಯ ಹೃದ್ರೋಗ ತಜ್ಞ ಡಾ || ಎ ಎಸ್ ಚಂದ್ರಶೇಖರ ರಾವ್ ಅವರ ಮಗ ಡಾ||ಎ.ಸಿ. ಶ್ಯಾಮ್, MBBS, MD, FCGP, FCCP, FIAMS, ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರಿನ ಸಮುದಾಯ ವೈದ್ಯಶಾಸ್ತ್ರದ ಪ್ರಾಧ್ಯಾಪಕ, ಅವರು ಡಾ. ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲಯ, ತಮಿಳುನಾಡಿನಿಂದ ಡಯಾಬಿಟೀಸ್ ಕುರಿತಂತೆ ಅವರ ಸಂಶೋಧನೆ ಮತ್ತು ಪ್ರಬಂಧಕ್ಕಾಗಿ *PhD* ಪದವಿಯನ್ನು ಪಡೆದಿದ್ದಾರೆ. ಇದು ಅವರ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ .

ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು

1) ಬಾಗಿಲಿನಿಂದ ಬರುವ ಈ ಸಾಧು ಪ್ರಾಣಿಯಿಂದ ಯುದ್ಧವೇ?

ಬಾಗಿಲು ಅಂದರೆ ಕದ ಸಾಧುಪ್ರಾಣಿ ದನ ಎರಡು ಕೂಡಿ ಶುದ್ಧವೇ ಎನ್ನುವ ಪ್ರಶ್ನೆಗೆ ಉತ್ತರ ಕದನ

2) ಇಂಗ್ಲೀಷಿನಲ್ಲಿ ಕರೆದ, ನಂತರ ಕನ್ನಡದಲ್ಲೂ ಕರೆದ. ಅದು ಬರದೇ ಅಲ್ಲೇ ಇದೆ.

ಇಂಗ್ಲಿಷ್ ನಲ್ಲಿ ಕರೆದ ಅಂದರೆ come= ಕಂ , ನಂತರ ಕನ್ನಡದಲ್ಲಿ ಕರೆದಿದ್ದು ಬಾ ಅದು ಬರೋದೇ ಅಲ್ಲೇ ನಿಂತಿರುವುದು ಕಂಬಾ =ಕಂಬ 

3) ಬೆಳಗಿನ ಚಳಿಗೆ ಬೆಚ್ಚಗೆ ಕುಡಿಯುವ ಇದಕ್ಕೆ ಬೆಲೆ ಕಟ್ಟಿದರೆ ರಾತ್ರಿಚಳಿಗೂ ಹೋದ್ದುಕೊಳ್ಳಬಹುದು.

ಬೆಳಗಿನ ಚಳಿಗೆ ಬೆಚ್ಚನೆ ಕುಡಿಯುವುದು ಚಾ  ಇದಕ್ಕೆ ಬೆಲೆ ಕಟ್ಟುವುದು ಎಂದರೆ ಎರಡು ಸೇರಿಸಿದರೆ ಚಾದರ ಚಳಿಗೆ ಹೊಂದಿಕೊಳ್ಳುವುದು

4) ಏಳೇ ದಿನದಲ್ಲಿ ಒಳ್ಳೇ ಸೂತ್ರ ಹಿಡಿದು ಯಜಮಾನ ಆದವ

ಏಳೇ  ದಿನ ಎಂದರೆ ವಾರ ಒಳ್ಳೆಯ ಎಂದರೆ ಸು ಸೂತ್ರ ಎಂದರೆ ದಾರ  ,ಯಜಮಾನ ಅಂದರೆ ವಾರಸುದಾರ

5) ಇಡೀ ಗೋಳದ ಒಂದು ಕೊನೆಯಿಂದ ಇನ್ನೊಂದುಕೊನೆಯವರೆಗೆ ಹೋದರೂ ಸಿಗುವ ಶ್ರೇಷ್ಠ ಋಷಿ

ಇಡೀ ಗೋಳದ  ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವುದು ಎಂದರೆ ಡಯಾಮೀಟರ್, ಕನ್ನಡದಲ್ಲಿ ವ್ಯಾಸ ಶ್ರೇಷ್ಠ ಋಷಿ ವ್ಯಾಸ ಮಹರ್ಷಿ

6) 5 ದಕ್ಕಿಂತ ಹೆಚ್ಚು ಅಕ್ಷರದ ಈ ಊರಿನ ಹೆಸರಿನ ವಾಹನದಲ್ಲಿ ಅಲ್ಲಿಗೆ ಹೋಗಲಾಗದು.

ಐದಕ್ಕಿಂತ ಹೆಚ್ಚು ಅಕ್ಷರ, ಬಹಳ ಜನ ಇದನ್ನ ಗಮನಿಸಿಲ್ಲ .ಆದ್ದರಿಂದ ವಿಮಾನಪುರ ಎಂದು ಬರೆದಿದ್ದೀರಿ .ಇದು ಹೂವಿನ ಹಡಗಲಿ. ಆ ಊರಿನ ಸುತ್ತ ಕೆರೆ ನದಿ ಇಲ್ಲದಿರುವುದರಿಂದ ಹಡಗಿನಲ್ಲಿ ಹೋಗಲಾಗುವುದಿಲ್ಲ

7) ಹುಬ್ಬಳ್ಳಿಯ ಹುಡುಗ ಏನೂ ಹೇಳದೆ ಮರ್ಯಾದೆ ತೆಗೆಯುತ್ತಾನೆಯೇ ?

ಹುಬ್ಬಳ್ಳಿ ಹುಡುಗ ಎಂದರೆ ಅವ ಏನು ಹೇಳದೆ ಎಂದರೆ ಹೇಳನ ಮರ್ಯಾದೆ ತೆಗೆಯುವುದು ಎಂದರೆ ಅವಹೇಳನ

8) ಮೀರಲಾರದ ತಂದೆಯ ಆಜ್ಞೆ

ಈ ಪ್ರಶ್ನೆಗೆ ಅನೇಕರು ಪಿತೃವಾಕ್ಯ ಎಂದು ಬರೆದಿದ್ದೀರಿ. ಪಿತೃವಾಕ್ಯ ಮೀರದಿದ್ದವನು ರಾಮ. ಅದನ್ನೇ ಮೀರಲೇ ಬಾರದೆಂದು ಜನರು ಹೇಳುತ್ತಾರೆ. (ಅದಕ್ಕೂ ಅಂಕ ಕೊಟ್ಟಿದೇನೆ) . ಆದರೂ ಅದು ಮೀರಬಾರದೆಂದು  ಕಾನೂನಿಲ್ಲ. ಕಾನೂನಿದ್ದು ಅದರಲ್ಲಿ ತಂದೆ ಎಂದರೆ ಅಪ್ಪ ಎಂದು ಹೆಸರು ಬರುವುದು ಹಾಗೂ ಮೀರಬಾರದು ಯಾವುದು ಎಂದರೆ ಕಟ್ಟಪ್ಪಣೆ 

9) ಒಟ್ಟಾಗಿ ದೇವರನ್ನು ಸ್ತುತಿಸುವದನ್ನು ಒಂದಕ್ಷರ ಸೇರಿಸಿ ಒಡೆದುಹಾಕುವುದು!

ಒಟ್ಟಾಗಿ ದೇವರನ್ನು ಸ್ತುತಿಸುವುದಕ್ಕೆ ಹೆಸರು ಭಜನೆ ಒಂದಕ್ಷರ ಸೇರಿಸಿ ಒಡೆದು ಹಾಕುವುದು ಎಂದರೆ ವಿಭಜನೆ

10) ಸತಿಯ ಸಂಬಂಧಿ ಕತ್ತಲ ಮದ್ಯೆ ಅಡಗಿರುವನೇ?

ಸತಿಯ ಸಂಬಂಧಿ ಎಂದರೆ ಮಾವ ಕತ್ತಲ ಮಧ್ಯದಲ್ಲಿ ಅಡಗಿರುವನೇ ಎಂಬುದಕ್ಕೆ ಉತ್ತರ ಅಮಾವಾಸ್ಯೆ

11) ಏನೂ ಆಗಲ್ಲ, ನಿಮ್ಮನ್ನು ಹಿಡಿದರೆ ದೊಡ್ಡವರು ಗೊತ್ತೆಂದು ಒಮ್ಮೆ ನಕ್ಕುಬಿಡಿ ಅನ್ನುತ್ತಿದ್ದವರು ಕೊನೆಗೆ ವಾಹನಕ್ಕೆ ಇದನ್ನು ಮಾಡಿಸಿದರು.

ಏನು ಆಗಲ್ಲ ಎನ್ನುವುದಕ್ಕೆ ಪರವಾಗಿಲ್ಲ,  ದೊಡ್ಡವರು ಗೊತ್ತು ಎಂದು ನಕ್ಕು ಬಿಡಿ= ನಗಿ  ವಾಹನಕ್ಕೆ ಇದನ್ನು ಮಾಡಿಸಿದರು ಪರವಾನಗಿ ಅಂದ್ರೆ ಲೈಸೆನ್ಸ್ .

12) ಕೊರಳ ಮಾಲೆಗೆ ಒಂದಕ್ಷರ ಸೇರಿ, ಅರಸನಿಗೆ ಕೊಂಬು ಬೆಳೆದು ಎಲ್ಲರಿಗೂ ಒದಗಿಸು.

ಕೊರಳ ಮಾಲೆ ಎಂದರೆ ಸರ ಒಂದಕ್ಷರ ಸೇರಿಸಿ ಬ, ಅರಸ ಎಂದರೆ ರಾಜ ಕೊಂಬು ಬೆಳೆದು ಎಂದರೆ ರಾಜು ಇದರ ಉತ್ತರ ಎಲ್ಲರಿಗೂ ಒದಗಿಸು=ಸರಬರಾಜು

13) ಸೊಟ್ಟ ಮನೆಯೇ? ಅಥವಾ ಗಾಜಿನ ಗುಣವೇ?

ಸೊಟ್ಟ ಮನೆ ಅಂದರೆ ವಕ್ರ ಭಾವನ ಗಾಜಿನ ಗುಣ = Refraction , ಕನ್ನಡದಲ್ಲಿ = ವಕ್ರೀ ಭವನ , ಇದೇ ಉತ್ತರ

14) ಇವನ ಹೆಸರಿಗೆ ಇನೀಷಿಯಲ್ ಸೇರಿಸಿದರೆ ಮಳೆ ನೀರು ಸರಾಗವಾಗಿ ಹರಿಯುತ್ತದೆ .

ಇವನ ಹೆಸರು ಚರಣ್ ಒಂದಕ್ಷರ ಸೇರಿಸಿದರೆ ಡಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತದೆ ಚರಂಡಿ

15) ಒಳ್ಳೆಯ ಸಮಾರಂಭ ಇರುವ ಸೂಚನೆಗಾಗಿ ಹಾಕುವ ಇದನ್ನು , ಬೇಗ ಹೇಳಿದರೆ , ತೆಲುಗಿನಲ್ಲಿ " (ಏನು ಸಮಾರಂಭ) ಹೇಳಪ್ಪಾ " ಎಂದಾಗುತ್ತದೆ !

ಸಮಾರಂಭಗಳಿಗೆ ಹಾಕುವುದು ಚಪ್ಪರ ತೆಲುಗಿನಲ್ಲಿ ಏನು ಹೇಳಪ್ಪ ಎನ್ನುವುದು ಚಪ್ರಾ

ನಿಮ್ಮ ಉತ್ತರಗಳು 

ಶ್ರೀಮತಿ ಎ ಸುಬ್ಬಲಕ್ಷ್ಮಿ 

ಡಾ || ಎ ಎಸ್ ಚಂದ್ರಶೇಖರ ರಾವ್ 

 

ಡಾ || ಮಂಜುಳಾ ವೆಂಕಟೇಶ್ ರಾವ್ 

 

   

 

ಶ್ರೀಮತಿ ರಾಜೇಶ್ವರಿ ನಾಗರಾಜ್ 

ಶ್ರೀ ಎ ಎಸ್ ಗೋವಿಂದ್  ಮತ್ತು ಶ್ರೀಮತಿ ಸವಿತಾ ಗೋವಿಂದ್ 

ಶ್ರೀಮತಿ ಸೌಮ್ಯ ನಾಗರಾಜ್ 

 
 

ಶ್ರೀ ಎಸ್ ವಿಠ್ಠಲ ರಾವ್ 

12 ಅಂಕ ಗಳಿಸಿದ ಡಾ || ಎ ಎಸ್ ಚಂದ್ರಶೇಖರ ರಾವ್ ಅವರಿಗೆ ಬಹುಮಾನ ಲಭಿಸಿದೆ. ಅವರಿಗೆ ಅಭಿನಂದನೆಗಳು 

 

ಈ ಸಂಚಿಕೆಯ ಸ್ಪರ್ಧೆ

🏢 ಸೋಮನ ಕುತೂಹಲಕಾರಿ ಇಂಟರ್ವ್ಯೂ – ಬಾಸ್ ಪ್ರಶ್ನೆಗೆ  ಸೋಮನ ಹಾಸ್ಯ ಉತ್ತರಗಳು 😂

(ಸೋಮನು ದೊಡ್ಡ IT ಕಂಪನಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದ. ಆದರೆ, ಬಾಸ್ ಕೇಳಿದ ಪ್ರಶ್ನೆಗಳಿಗೆ , ಅವನ ಉತ್ತರಗಳನ್ನು ಕೇಳಿ , ಇಂಟರ್ವ್ಯೂ ಮಾಡಿದವರೇ ನಗುವನ್ನು ನಿಲ್ಲಿಸೋಕೆ ಆಗಲಿಲ್ಲ! 😆)

 *ನೀವು ಸೋಮನ ಹಾಸ್ಯಮಯ ಉತ್ತರಗಳನ್ನು ಊಹಿಸಿ  ಬರೆಯಬೇಕು .ಪ್ರಶ್ನೆ ಬರೆಯುವುದು ಬೇಡ. 1, 2, ಎಂದು ನಂಬರ್ ಹಾಕಿ ಉತ್ತರಗಳನ್ನು ಬರೆದು ಕಳುಹಿಸಿ .ಉತ್ತಮ ಉತ್ತರಕ್ಕೆ ಬಹುಮಾನ .

🤵‍♂️ ಬಾಸ್ vs. 😆 ಸೋಮ

    ಬಾಸ್ ನ 10 ಪ್ರಶ್ನೆಗಳು 

  1. ಬಾಸ್: ನಿನ್ನ ಬಯೋಗ್ರಫಿ ಒಂದು ವಾಕ್ಯದಲ್ಲಿ ಹೇಳು.                  ಸೋಮ :-------- 
  2. ಬಾಸ್: ನೀನು ನಮ್ಮ ಕಂಪನಿಗೆ ಏನು  ಕೊಡುಗೆ ನೀಡಬಲ್ಲೆ?               ಸೋಮ :--------
  3.  ಬಾಸ್: ನಮ್ಮ ಕಂಪನಿಯಲ್ಲಿ ಟೀಂ ವರ್ಕ್ ಹೇಗೆ ಮಾಡುತ್ತೀಯ?    ಸೋಮ :--------
  4.  ಬಾಸ್: ನೀನು ಒತ್ತಡದಲ್ಲಿ ಹೇಗೆ ಕೆಲಸ ಮಾಡುತ್ತಿ ?                  ಸೋಮ :--------
  5.  ಬಾಸ್: ನೀನು ಬೆಳಿಗ್ಗೆ ಎಷ್ಟು ಹೊತ್ತಿಗೆ ಏಳುತ್ತೀಯ?                   ಸೋಮ :--------
  6.  ಬಾಸ್: ನಿನ್ನ ತೀವ್ರ ವೈಫಲ್ಯ (failure) ಯಾವುದು?                ಸೋಮ :--------
  7. ಬಾಸ್: ನೀನು ಗೂಗಲ್ ಬಗ್ಗೆ ಏನು ಹೇಳಬಹುದು?                    ಸೋಮ :--------
  8.  ಬಾಸ್: ನಿಜವಾಗಿಯೂ – ನಿನ್ನ ದೊಡ್ಡ ಶಕ್ತಿ ಏನು?                     ಸೋಮ :--------
  9.  ಬಾಸ್: ನೀನು ಇನ್ನು 5 ವರ್ಷಗಳಲ್ಲಿ ಎಲ್ಲಿ ಇರಬೇಕು ಅಂದುಕೊಡಿದ್ದೀಯ ?    ಸೋಮ :--------
  10.   ಬಾಸ್: ಕೊನೆಯ ಪ್ರಶ್ನೆ – ನೀನು ಈ ಕೆಲಸಕ್ಕೆ ಯೋಗ್ಯನಾ?                  ಸೋಮ :--------

ವಿಶೇಷ ವ್ಯಕ್ತಿ- ಎನ್ ಪಿ ಶರ್ಮಾ 

                        

 

ಹೆಸರು            : ಎನ್.ಪಿ.ಶರ್ಮಾ

ವಿದ್ಯಾರ್ಹತೆ       : ಬಿಇ, ಎಂಟಿಪಿ, ಎಂಪಿಎ (ಆಪರೇಷನ್ಸ್), ಎಂಬಿಎ (ಫೈನಾನ್ಸ್)

ಈ ಕೆಳಗಿನ ವಿಡಿಯೋ  ನೋಡಿ, ನಂತರ ಮುಂದೆ ಓದಿ .

[embed]https://youtu.be/p_2MIfVjVkg[/embed]

ವೃತ್ತಿಜೀವನದ ಕಾಲಾನುಕ್ರಮ

1987 ರಲ್ಲಿ ರೈಟ್ಸ್ (ಭಾರತ ಸರ್ಕಾರದ ಉದ್ಯಮ) ದರ್ಜೆಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇರಿಕೊಂಡರು, ಅದಕ್ಕೂ ಮೊದಲು, ಬಿಇ ನಂತರ ಬೆಂಗಳೂರಿನ ಸೆಮ್ಯಾಕ್ ಲಿಮಿಟೆಡ್ನಲ್ಲಿ ಒಂದು ವರ್ಷದ ಅನುಭವ ಹೊಂದಿದ್ದರು ಮತ್ತು ಸ್ನಾತಕೋತ್ತರ ಪದವಿಗೆ ಸೇರಿದರು. ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಕನ್ಸಲ್ಟಿಂಗ್ ಎಂಜಿನಿಯರಿಂಗ್ ಸೀರೀಸ್ ಪ್ರೈವೇಟ್ ಲಿಮಿಟೆಡ್ (ನವದೆಹಲಿ) ನಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದರು.

  • 1987 ಅಸಿಸ್ಟೆಂಟ್ ಮ್ಯಾನೇಜರ್ ರೈಟ್ಸ್ ಲಿಮಿಟೆಡ್

  • ೧೯೮೯ ರಲ್ಲಿ ರೈಟ್ಸ್ ನಲ್ಲಿ ವ್ಯವಸ್ಥಾಪಕರಾಗಿ ಬಡ್ತಿ  ಪಡೆದರು.

  • ರೈಟ್ಸ್ ಲಿಮಿಟೆಡ್ ನಲ್ಲಿ 1995 ರಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ  ಪಡೆದರು

  • ರೈಟ್ಸ್ ಲಿಮಿಟೆಡ್ ನಲ್ಲಿ 2002 ರಲ್ಲಿ ಜಂಟಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ  ಪಡೆದರು

  • 2007ರಲ್ಲಿ ಬಿಎಂಆರ್ ಸಿಎಲ್ ನಲ್ಲಿ ಮುಖ್ಯ ಎಂಜಿನಿಯರ್ (ವಿನ್ಯಾಸ ಮತ್ತು ಗುತ್ತಿಗೆ) ಆಗಿ ನೇಮಕಗೊಂಡರು

ಬಿಎಂಆರ್ ಸಿಎಲ್ ನ ಸ್ಟ್ರೆಚ್ 1 ರ ವಿವರವಾದ ವಿನ್ಯಾಸ ಮತ್ತು ಮೆಟ್ರೋ ನಿಲ್ದಾಣಗಳು, ವಯಾಡಕ್ಟ್, ಡೆಪೊ ಮತ್ತು ಭೂಗತ ರಚನೆಗಳಿಗೆ ಪಿಎಚ್ ಇ 1 ಮತ್ತು ಹಂತ 2 ಗಾಗಿ ದೇಸಿಹ್ ಗನ್ ಗಳ ಮೇಲ್ಛಾವಣಿ ಪರಿಶೀಲನೆಯ ಬಗ್ಗೆ ಮಾಹಿತಿ ನೀಡಲಾಗಿದೆ

  • 2009 ರಿಂದ 2014 ಮುಖ್ಯ ಎಂಜಿನಿಯರ್ (ವಿನ್ಯಾಸ ಮತ್ತು ಭೂಗತ ನಿರ್ಮಾಣ) ಬಿಎಂಆರ್ಸಿಎಲ್

  • 2015 ರಿಂದ 2016- ಬಿಎಂಆರ್ ಸಿಎಲ್ ನ 2 ನೇ ಹಂತದ ಮುಖ್ಯ ಎಂಜಿನಿಯರ್ ವಿನ್ಯಾಸದಲ್ಲಿ ಕೆಲಸ ಮಾಡಿದರು. ಹಂತ 2 ವೊಯಾಡಕ್ಟ್, ನಿಲ್ದಾಣಗಳ ವಿನ್ಯಾಸದಲ್ಲಿ ತೊಡಗಿಸಿಕೊಂಡರು .

  • 2016ರಲ್ಲಿ ಬಿಎಂಆರ್ ಸಿಎಲ್ ನ ಚೀಫ್ ಜನರಲ್ ಮ್ಯಾನೇಜರ್ (ಸಿವಿಲ್) ಮತ್ತು ಪ್ರಿನ್ಸಿಪಾಲ್, MAY2022 ಚೀಫ್ ಜನರಲ್ ಮ್ಯಾನೇಜರ್ (ಸಿವಿಲ್) ಹುದ್ದೆಗಳನ್ನು ಅಲಂಕರಿಸಿದ್ದರು. 

  • 2022 ಮತ್ತು 2023ರಲ್ಲಿ ಅಸೋಸಿಯೇಟ್ ಡೈರೆಕ್ಟರ್ (ಇನ್ಫ್ರಾಸ್ಟ್ರಕ್ಚರ್) ಡಿಸೈನ್ ಟ್ರೀ ಬೆಂಗಳೂರು. 

  • ಪ್ರಸ್ತುತ ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ

 

ಪ್ರಮುಖ ಸದಸ್ಯತ್ವಗಳು

ಇವರು ಅನೇಕ ವೃತ್ತಿಪರ ಸಂಸ್ಥೆಗಳ ಸದಸ್ಯರಾಗಿದ್ದಾರೆ 

ಪ್ರಮುಖ ಪ್ರಶಸ್ತಿಗಳು

  1.  ಇನ್ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಇಂಜಿನಿಯರ್ಸ್ ಇಂಡಿಯಾದಿಂದ 1 ಅತ್ಯುತ್ತಮ ಸೇತುವೆ ಪ್ರಶಸ್ತಿ  2003 - ಹೆಬ್ಬಾಳ ಫ್ಲೈಓವರ್, ಬೆಂಗಳೂರು

  2.  ಎಸಿಸಿಐ ಬೆಂಗಳೂರು 2018 ನಿಂದ ಶ್ರೇಷ್ಠ ಎಂಜಿನಿಯರ್ ಪ್ರಶಸ್ತಿ

ಮೆಟ್ರೋ ಯೋಜನೆಗಳು - ಅನುಭವ:

  • 1991 ರಿಂದ ರೈಲ್ವೆ ಸಂಬಂಧಿತ ಯೋಜನೆಗಳ ಯೋಜನೆ, ವಿನ್ಯಾಸ ಮತ್ತು ಕಾರ್ಯಗತಗೊಳಿಸುವಲ್ಲಿ ಮತ್ತು ನಿರ್ದಿಷ್ಟವಾಗಿ ಮೆಟ್ರೋ ಸಂಬಂಧಿತ ಯೋಜನೆಗಳಲ್ಲಿ 23 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿದೆ.

  • ದೆಹಲಿ ಮೆಟ್ರೋಗೆ ಡಿಪಿಆರ್.

  • ದೆಹಲಿ ಮೆಟ್ರೋ (357 ಕಿ.ಮೀ) ಗಾಗಿ ಮಾಸ್ಟರ್ ಪ್ಲಾನ್ ತಯಾರಿಕೆ.

  • ಬೆಂಗಳೂರು ಮೆಟ್ರೋದ ಪರಿಕಲ್ಪನೆಯಿಂದ ಹಂತ 1 ರ ಕಾರ್ಯಾರಂಭ ಮತ್ತು ಹಂತ 2 ರ ವಿನ್ಯಾಸದವರೆಗೆ ಒಳಗೊಂಡಿದೆ

  • ಬೆಂಗಳೂರು ಮೆಟ್ರೋದ 2 ನೇ ಹಂತದ ಯೋಜನೆ ಮತ್ತು ಡಿಪಿಆರ್ ತಯಾರಿಕೆ, ಬೆಂಗಳೂರು ಮೆಟ್ರೋದ 3 ನೇ ಹಂತದ ಯೋಜನೆಯಲ್ಲಿ ಭಾಗಿಯಾಗಿದೆ.

  • ಪ್ರಧಾನ ತರಬೇತಿ ಸಂಸ್ಥೆ ತರಬೇತಿ ಯೋಜನೆ ಮತ್ತು ಒ &ಎಂ ಸಿಬ್ಬಂದಿಯಾಗಿ ಕೆಲಸ ಮಾಡಿದರು ಮತ್ತು ಕೊಚ್ಚಿ, ಅಹಮದಾಬಾದ್, ಮುಂಬೈ ಮುಂತಾದ ಇತರ ಮೆಟ್ರೋ ಸಿಬ್ಬಂದಿಗೆ ತರಬೇತಿ ನೀಡಿದರು

  • ಮುಖ್ಯ ಜನರಲ್ ಮ್ಯಾನೇಜರ್ (ಸಿವಿಲ್) ಒ &ಎಂ ಆಗಿ ಕೆಲಸ ಮಾಡಿದರು ಮತ್ತು ವಿವಿಧ ವ್ಯವಸ್ಥೆಗಳಾದ ಸಿವಿಐಎಲ್ ಮತ್ತು ಇ &ಎಂ ನೊಂದಿಗೆ ಮುಖಾಮುಖಿ ಕೆಲಸಗಳನ್ನು ಊಹಿಸುವಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡರು

 

ಬೆಂಗಳೂರು ಮೆಟ್ರೋದಲ್ಲಿ ಇವರ ಕಾರ್ಯ ಈ ಕೆಳಗಿನವುಗಳನ್ನು ಒಳಗೊಂಡಿದೆ:

  • ಕಾರ್ಯಸಾಧ್ಯತಾ ಅಧ್ಯಯನಗಳು, ಸಂಚಾರ ಬೇಡಿಕೆ ಪ್ರಕ್ಷೇಪಣಗಳು, ಸ್ಥಳಾಕೃತಿ ಸಮೀಕ್ಷೆಗಳು, ಜಿಯೋ ತಾಂತ್ರಿಕ ತನಿಖೆಗಳು, ವೆಚ್ಚ ಮತ್ತು ಆರ್ಥಿಕ ವಿಶ್ಲೇಷಣೆ ಸೇರಿದಂತೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವುದು.

  • ಯೋಜನಾ ಆಯೋಗ ಮತ್ತು ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಯೋಜನೆಯ ಅನುಮೋದನೆಗಾಗಿ ತಾಂತ್ರಿಕ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದೆ.

  • ಅಂಡರ್ ಗ್ರೌಂಡ್ ನಿರ್ಮಾಣದಲ್ಲಿ ಒಳಗೊಂಡಿರುವ ತಾಂತ್ರಿಕ ಆರ್ಥಿಕ ಮತ್ತು ಅಪಾಯದ ಸಮಸ್ಯೆಗಳ ಸ್ಪಷ್ಟೀಕರಣಕ್ಕಾಗಿ ಯೋಜನೆಗೆ ಛತ್ರಿ ಕವರ್ ವಿಮೆ ಪಡೆಯಲು ಸಿಂಗಾಪುರದಲ್ಲಿ ನಡೆಯುವ ಜಾಗತಿಕ ವಿಮಾ ಪ್ರಿಬಿಡ್ ಸಭೆಗೆ ಹಾಜರಾಗಿ.

  • ಇಡೀ ಹಂತ 1 - 42.3 ಕಿ.ಮೀ.ಗೆ ಎಲ್ಲಾ ಸಿವಿಲ್ ಎಂಜಿನಿಯರಿಂಗ್ ರಚನೆಗಳ ವಿನ್ಯಾಸ, ಯೋಜನೆ ಮತ್ತು ವಿನ್ಯಾಸದಲ್ಲಿ ಮುಖ್ಯ ಎಂಜಿನಿಯರ್ ಆಗಿ ತೊಡಗಿಸಿಕೊಂಡಿದ್ದಾರೆ.

ಹಂತ 1 ಮತ್ತು ಹಂತದ 2 ವಿನ್ಯಾಸ:

ಇದು ವಯಾಡಕ್ಟ್, ನಿಲ್ದಾಣ, ಡೆಪೊದ ವಿನ್ಯಾಸದ ವಿನ್ಯಾಸ / ಪುರಾವೆ ಪರಿಶೀಲನೆಯಲ್ಲಿ ಒಳಗೊಂಡಿದೆ

 

ಗ್ರೌಂಡ್ ಡಿಸೈನ್ / ನಿರ್ಮಾಣ ಅನುಭವ:

 

  • ಬೆಂಗಳೂರು ಮೆಟ್ರೋದ ಅಂಡರ್ ಗ್ರೌಂಡ್ ವಿಭಾಗಗಳ ಯೋಜನೆ ಮತ್ತು ವಿನ್ಯಾಸ, ಇದರಲ್ಲಿ ತಾತ್ಕಾಲಿಕ ಬೆಂಬಲ ರಚನೆಗಳಾದ ಸೈನಿಕ ರಾಶಿಗಳು, ಸೀಕಂಟ್ ಪೈಲ್ಸ್, ಮಣ್ಣಿನ ಲಂಗರುಗಳು ಇತ್ಯಾದಿಗಳು ಸೇರಿವೆ. ಬೆಂಬಲ ವ್ಯವಸ್ಥೆಗಳು ವಾಲರ್ಸ್, ಸ್ಟಟ್ಸ್ ಮತ್ತು ಟೈಪ್ ಪೋಸ್ಟ್ಗಳನ್ನು ಸಹ ಒಳಗೊಂಡಿವೆ. ಸಂಚಾರ ತಿರುವುಗಾಗಿ ವ್ಯಾಪಕವಾದ ಡೆಕಿಂಗ್ ಅನ್ನು ವಿನ್ಯಾಸಗೊಳಿಸಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು. ಮೆಜೆಸ್ಟಿಕ್ ಇಂಟರ್ ಚೇಂಜ್ ಸ್ಟೇಷನ್ ಸೇರಿದಂತೆ ಒಟ್ಟು 8.8 ಕಿ.ಮೀ ಉದ್ದದ 7 ಅಂಡರ್ ಗ್ರೌಂಡ್ ಸ್ಟೇಷನ್ ಗಳಿವೆ.

  • ಮೇಲಿನ ಯುಜಿ ವಿಭಾಗದ ನಿರ್ಮಾಣಕ್ಕಾಗಿ ಉಸ್ತುವಾರಿ ಮುಖ್ಯ ಎಂಜಿನಿಯರ್.

 

ಇತರ ರೈಲ್ವೆ ಸಂಬಂಧಿತ / ಸೇತುವೆ ಯೋಜನೆಗಳು:

ಭಾರತದ ವಿವಿಧ ರಾಜ್ಯಗಳಲ್ಲಿ ಮುಖ್ಯ ಮಾರ್ಗ ರೈಲ್ವೆ ಹಳಿಯನ್ನು ದಾಟುವ 30 ಕ್ಕೂ ಹೆಚ್ಚು ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳಸೇತುವೆಗಳ ಬಾಕ್ಸ್ ಕಲ್ವರ್ಟ್ ಗಳು ಸೇರಿದಂತೆ ಯೋಜನೆ ಮತ್ತು ವಿನ್ಯಾಸ ಮತ್ತು ನಿರ್ಮಾಣ ನಿರ್ವಹಣೆ, ಮತ್ತು ಸೆಗ್ಮೆಂಟಲ್ ಮತ್ತು ಪೂರ್ವ-ಒತ್ತಡದ ಬಾಕ್ಸ್ ನಿರ್ಮಾಣಗಳೊಂದಿಗೆ ಉದ್ದದ ಸೇತುವೆಗಳನ್ನು (45-66 ಮೀ) ಒಳಗೊಂಡಿರುವ ಸುಮಾರು 20 ರಸ್ತೆ ಮೇಲ್ಸೇತುವೆಗಳು ಮತ್ತು ಇಂಟರ್ಚೇಂಜ್ ಗಳು ಮಾಡಿದ್ದಾರೆ.

ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

  • ಸೇಲಂ ಬೆಂಗಳೂರು ಮಾರ್ಗದ ಮೂಲಕ ಬೆಂಗಳೂರಿನ ಹೆಬ್ಬಾಳ ಇಂಟರ್ಚೇಂಜ್ (ಸೆಗ್ಮೆಂಟಲ್ ನಿರ್ಮಾಣದ 3.2 ಕಿ.ಮೀ).

  • ಬೆಂಗಳೂರಿನ ಲಿಂಗರಾಜಪುರಂ ಆರ್ ಒಬಿ, ಸೇಲಂ ಬೆಂಗಳೂರು ಮಾರ್ಗದ ಮೇಲೆ.

  • ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದ ಮೇಲೆ ನೈಸ್ ರಸ್ತೆ ಆರ್ ಒಬಿ.

  • ಮಂಗೋಲ್ಪುರಿ ಫ್ಲೈಓವರ್, ದೆಹಲಿ. ದೆಹಲಿ ರೋಥಕ್ ಲೈನ್.

  • ಗುಲ್ಬರ್ಗಾ ರಿಂಗ್ ರಸ್ತೆಯ ಬೆಂಗಳೂರು ಮೀರಜ್ ಲೈನ್ ಮೇಲೆ ಎರಡು ರಾಬ್ ಗಳು.

  • ಚೆನ್ನೈ ಮುಖ್ಯ ಲೈನ್ ಅಡಿಯಲ್ಲಿ ಶಿವಾನಂದ ವೃತ್ತದಲ್ಲಿ ಆರ್ ಯುಬಿ (ಬಾಕ್ಸ್ ಪುಷಿಂಗ್).

  • ಬೆಂಗಳೂರಿನಲ್ಲಿ ಆರ್ ಯುಬಿ ಚೆನ್ನೈ ಮುಖ್ಯ ಲೈನ್ (ಬಾಕ್ಸ್ ಪುಷಿಂಗ್) ಇತ್ಯಾದಿಗಳ ಅಡಿಯಲ್ಲಿ ಬರುವುದಿಲ್ಲ.

  • ಮೇಲಿನ ರಚನೆಗಳಿಗೆ ಎತ್ತರದ ತಡೆಗೋಡೆಗಳು ಮತ್ತು ಆರ್ ಇ ಗೋಡೆಗಳ ವಿನ್ಯಾಸ ಮತ್ತು ನಿರ್ಮಾಣ.

  • ಎಲಿವೇಟೆಡ್ ಜಿಟಿ ರಸ್ತೆಯ ವಿನ್ಯಾಸ ಮತ್ತು ನಿರ್ಮಾಣ ನಿರ್ವಹಣೆ (ಎನ್ಎಚ್ -10, ಪೈಲ್ ಅಡಿಪಾಯದ ಮೇಲೆ ಸೆಗ್ಮೆಂಟಲ್ ನಿರ್ಮಾಣದೊಂದಿಗೆ 3.8 ಕಿ.ಮೀ ಸೇತುವೆ).

 ಶರ್ಮಾ ಅವರು , ಸುಮಾರು 15 ಜನ ತಮ್ಮ ಗೆಳೆಯರನ್ನು  20/03/2025 ರಂದು ಮೆಟ್ರೊ ಪರಿಚಯಿಸಲು ಕರೆದುಕೊಂಡು ಹೋದರು. ಅದು ನನ್ನ  ಜೀವನದಲ್ಲಿ ಮರೆಯಲಾಗದ ದಿನ. ಅಂದಿನ ಕೆಲವು ಚಿತ್ರಗಳು. 

 

ಇದು ಮೇಜಸ್ಟಿಕ್ ಮೆಟ್ರೊ ನಿಲ್ದಾಣದ ಮಾದರಿ . ಇದು, ಒಟ್ಟು ಕಟ್ಟಡ ಲೆಕ್ಕದಲ್ಲಿ  ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಮೆಟ್ರೊ ನಿಲ್ದಾಣ . ಇದರ ಪೂರ್ತ ವಿನ್ಯಾಸದಿಂದ ಈಗಿನ ವರೆಗೆ ಸಂಪೂರ್ಣವಾಗಿ ಶರ್ಮಾ ಅವರೇ ಮಾಡಿದ್ದಾರೆ.

 
 

ಇದು ಮಹಾತ್ಮಾ ಗಾಂಧಿ ರಸ್ತೆ ಮೆಟ್ರೊ ನಿಲ್ದಾಣದ ಬಳಿ ಇರುವ 14 ಕಿ ಮಿ ಉದ್ದದ ಸುರಂಗ . ಇದು ದಕ್ಷಿಣ ಭಾರತದಲ್ಲೇ ಅತಿ  ಉದ್ದದ ಸುರಂಗ .ಇದರ ಪೂರ್ತ ವಿನ್ಯಾಸದಿಂದ ಈಗಿನ ವರೆಗೆ ಸಂಪೂರ್ಣವಾಗಿ ಶರ್ಮಾ ಅವರೇ ಮಾಡಿದ್ದಾರೆ.

 
 
[embed]https://youtube.com/shorts/Kqu9kt05o3E?feature=share[/embed]                       ಸುರಂಗದಲ್ಲಿ ಮಾರ್ಗದಲ್ಲಿ  ನಾನು ನಡೆದುಕೊಂಡು ಹೋಗುತ್ತಿರುವುದು 
   

ಸುರಂಗ ನಿಲ್ದಾಣಗಳ acಗಳಿಗೆ ಹೊಸ ಗಾಳಿ ಒದಗಿಸುವ ವ್ಯವಸ್ಥೆ 

 
 

ದೊಡ್ಡ ದುರಸ್ತಿಗಳ ವಿಭಾಗ  

 
 

ಇಂಜಿನ್ ಅಥವಾ ಭೂಗಿಗಳನ್ನು 180 ಡಿಗ್ರೀ ತಿರುಗಿಸುವ ವ್ಯವಸ್ಥೆ.

 
 

ಪರೀಕ್ಷೆಗಾಗಿ ಬಂದಿರುವ ಒಂದು ಭೋಗಿ 

 
 

ಅವರು ವಿವರಿಸಿದ್ದರಲ್ಲಿ ನನಗೆ ಎಷ್ಟು ಅರ್ಥವಾಗಿದೆಯೋ ಅಷ್ಟರಲ್ಲಿ , ನಿಮಗೆ ಬರಬಹುದಾದ ಕೆಲವು ಪ್ರಶ್ನೆಗಳಿಗೆ ನನ್ನ ಉತ್ತರಗಳು.

1) ಕರೆಂಟು ಹೋದರೆ ರೈಲು ನಿಂತು ಬಿಡುವುದೇ?

ಕರೆಂಟು ಮೂರನೇ ಕಂಬಿ ವ್ಯವಸ್ಥೆ  (third rail system) ಎಂದರೆ ಕಂಬಿಯ ಕೆಳಗಡೆಯಿಂದ ಬರುತ್ತದೆ. ಅದು ಒಂದು ಫೇಲಾದರೆ ಇನ್ನೊಂದು ಇರುತ್ತದೆ. ಹಾಗೂ ಇನ್ನೂ ಒಂದು, ಒಟ್ಟು ಮೂರು ಮೂರು ಇರುತ್ತವೆ.  ಆ ಮೂರು ಫೇಲಾದರೂ ಕೂಡ ಎಮರ್ಜೆನ್ಸಿ ಸರ್ವಿಸ್ ಅಂತ ನಾಲ್ಕನೆಯದು  ಇರುತ್ತದೆ .ಅದು ಬಾರದಿದ್ದರೆ ಮೆಟ್ರೋ ರೈಲಿನಲ್ಲಿ ಎರಡು ಸ್ಟೇಷನ್ ಮುಂದಕ್ಕೆ ಹೋಗುವಷ್ಟು ಬ್ಯಾಟರಿ ಇರುತ್ತದೆ.

2) ಅಕಸ್ಮಾತ್ ರೈಲು ಇನ್ಯಾವುದೇ ಕಾರಣದಿಂದ ಕೆಟ್ಟು ನಿಂತರೆ ಎಲ್ಲ ರೈಲುಗಳು ನಿಂತು ಹೋಗುವುದೇ?

ಕೆಲಕಾಲ ನಿಲ್ಲಬಹುದು ಆ ಕೆಟ್ಟು ಹೋದರೆ ಇದನ್ನು ಪಕ್ಕಕ್ಕೆ ಇಡಲು ಒಂದೆರಡು ಸ್ಟೇಷನ್ಗಳ ಅಂತರದಲ್ಲಿ ಸೈಡ್ ಟ್ರ್ಯಾಕ್ ಎಂದು ನಿರ್ಮಿಸಿರುತ್ತಾರೆ. ಅಲ್ಲಿಯವರೆಗೂ ಅದನ್ನು ತೆಗೆದುಕೊಂಡು ಹೋಗಿ ಆ ಸೈಟ್ ಟ್ರ್ಯಾಕಿನಲ್ಲಿ ನಿಲ್ಲಿಸಿದ ಮೇಲೆ ಬಾಕಿ ರೈಲುಗಳು ಮೊದಲಿನಂತೆ ಓಡಾಡಬಹುದು.

3) ಅಕಸ್ಮಾತ್ ಡ್ರೈವರ್ ಗೆ ಓಡಿಸುವುದು ಕಷ್ಟವಾದಾಗ ಏನಾಗುತ್ತದೆ?

ಬೈಯಪ್ಪನಹಳ್ಳಿ ಯಲ್ಲಿ ಬೆಂಗಳೂರಿನ ಇಡೀ ಮೆಟ್ರೋ ಓಡಾಡುವ ಎಲ್ಲ ಚಲನಚಿತ್ರಗಳನ್ನು ಗಮನಿಸುವ ಹಾಗೂ ನಿಯಂತ್ರಿಸುವ ಒಂದು ದೊಡ್ಡ ವ್ಯವಸ್ಥೆ ಇದೆ ಯಾವುದೇ ಡ್ರೈವರ್ ಗೆ ಏನೇ ತೊಂದರೆ ಆದರೂ ಅಲ್ಲಿ ಗೊತ್ತಾಗುತ್ತದೆ ಹಾಗೂ ಆ ಕಂಟ್ರೋಲ್ ರೂಮಿನಿಂದ ರೈಲನ್ನು ಅವರೇ ಓಡಿಸಬಹುದಾಗಿದೆ.

4) ಚಾಲಕ್ಯರಹಿತ ರೈಲು ಬರುವುದೇ?

ಬರುವುದು ಮತ್ತು ಈಗಾಗಲೇ ಪ್ರಾಯೋಗಿಕವಾಗಿ ಬಂದಿದೆ ಹಾಗೂ ಓಡಾಡುತ್ತಿದೆ ಈಗಿರುವ ರೈಲಿನಲ್ಲೂ ಚಾಲಕರು ಪ್ರೋಗ್ರಾಮನ್ನು ನೋಡಿಕೊಂಡೆ ಓಡಿಸುತ್ತಿರುತ್ತಾರೆ. ಅವರಿಲ್ಲದಿದ್ದರೂ ಪ್ರೋಗ್ರಾಮ್ ಮೂಲಕ ರೈಲು ಓಡಾಡುತ್ತದೆ ಅವಾಗ ಚಾಲಕರು ಬದಲು ಒಬ್ಬರು ನಿರ್ವಾಹಕರಂತೆ ಮೆಟ್ರೋ ಪೂರ್ತಿ ಓಡಾಡುತ್ತಿರುತ್ತಾರೆ.

ಇವರ ಅದ್ಭುತ ಕಾರ್ಯದಕ್ಷತೆಯನ್ನು ಕಂಡು, ಇವರನ್ನು ಅನೇಕ ರಾಜ್ಯಗಳ ಪ್ರಮುಖ ಕೆಲಸಗಳಿಗೆ ನೇಮಿಸಲಾಯಿತು.

ಇವರು ಪ್ರಮುಖ ಸಾರಿಗೆ ಮತ್ತು ಸಂಬಂಧಿತ ಮೂಲಸೌಕರ್ಯ ಯೋಜನೆಗಳಲ್ಲಿ 16 ರಾಜ್ಯಗಳ ಹಲವಾರು ಭಾರತೀಯ ನಗರಗಳಲ್ಲಿ ಕೆಲಸ ಮಾಡಿದರು.

ಇತರ ಯೋಜನೆಗಳು

 

  • ಬಹು ಮಾದರಿ ಸಾರಿಗೆ ಯೋಜನೆಗಳಾದ ದೆಹಲಿ ಎಂಆರ್ ಟಿಎಸ್ ನ ಯೋಜನೆ ಮತ್ತು ವಿನ್ಯಾಸ, (ಡಿಪಿಆರ್ ತಯಾರಿಕೆ, ಪ್ರಯಾಣ ಬೇಡಿಕೆ ಪ್ರಕ್ಷೇಪಣಗಳು ಮತ್ತು ನಿಲ್ದಾಣದ ಪ್ರದೇಶ ಯೋಜನೆ, ಟೆಂಡರ್ ದಾಖಲೆಗಳ ತಯಾರಿಕೆ), ಬೆಂಗಳೂರು ಮೆಟ್ರೋದ ಪರಿಕಲ್ಪನೆಯಿಂದ ಇಲ್ಲಿಯವರೆಗೆ ಕಾರ್ಯಾರಂಭ ಮಾಡುವವರೆಗೆ. ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ನಿಲ್ದಾಣ ಯೋಜನೆ ಮತ್ತು ಪ್ರಸಾರ ಮತ್ತು ಏಕೀಕರಣದಲ್ಲಿ ತೊಡಗಿಸಿಕೊಂಡಿದೆ. ದೆಹಲಿ, ಬೆಂಗಳೂರು, ಚೆನ್ನೈ, ಕೊಚ್ಚಿಯಂತಹ ಭಾರತದ ವಿವಿಧ ಮೆಟ್ರೋಗಳಿಗೆ ಸಂಚಾರ ತಿರುವು ಯೋಜನೆಗಳನ್ನು ಸಿದ್ಧಪಡಿಸುವುದು, ಡಿಪಿಆರ್ ಸಿದ್ಧಪಡಿಸುವುದು.
  • ಕರ್ನಾಟಕದಲ್ಲಿ ರೈಲ್ವೆ ಸೈಡಿಂಗ್ ಗಳ ಯೋಜನೆ ಮತ್ತು ನಿರ್ಮಾಣ ನಿರ್ವಹಣೆ.
  • ಭಾರತದಲ್ಲಿ ಎಲಿವೇಟೆಡ್ ರಸ್ತೆಗಳು, ಇಂಟರ್ಚೇಂಜ್ಗಳು / ಫ್ಲೈಓವರ್ಗಳು ಮತ್ತು ರಾಬ್ಸ್ ಮತ್ತು ನಗರ ರಸ್ತೆಗಳು ಮತ್ತು ಹೆದ್ದಾರಿಗಳ ಟೆಂಡರ್ ದಾಖಲೆಗಳ ತಯಾರಿಕೆ ಮತ್ತು ವಿವರವಾದ ಎಂಜಿನಿಯರಿಂಗ್ ವಿನ್ಯಾಸದಲ್ಲಿ ಒಳಗೊಂಡಿದೆ. ಮೇಲಿನವುಗಳ ನಿರ್ಮಾಣ ನಿರ್ವಹಣೆಯಲ್ಲಿ ತೊಡಗಿದೆ.
  •  ರಾಷ್ಟ್ರೀಯ ಮಟ್ಟದಲ್ಲಿ ಸಾರಿಗೆ ಬೇಡಿಕೆ ಅಂದಾಜು, ಹೆಚ್ಚಿನ ಸಾಂದ್ರತೆಯ ಕಾರಿಡಾರ್ ಗಳನ್ನು ಗುರುತಿಸುವುದು ಸೇರಿದಂತೆ ವಾಹನ ಫ್ಲೀಟ್ ಆಧುನೀಕರಣ ಮತ್ತು ರಸ್ತೆ ಬಳಕೆ ಶುಲ್ಕಗಳ ಅಧ್ಯಯನದಂತಹ ರಾಷ್ಟ್ರೀಯ ಮಟ್ಟದ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ  
  • ಗುಲ್ಬರ್ಗರಿಂಗ್ರಸ್ತೆ(200102)                                                                                                                         
  • ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲು ತಂಡದ ನಾಯಕ, ಟೆಂಡರ್ ತಯಾರಿಕೆ ಮತ್ತು ಮೌಲ್ಯಮಾಪನದಲ್ಲಿ ಒಳಗೊಂಡಿರುವ ವಿನಿಮಯಕ್ಕಾಗಿ ಡಿಪಿಆರ್. ನಿರ್ಮಾಣದ ಸಮಯದಲ್ಲಿ ನಿರ್ಮಾಣ ನಿರ್ವಹಣೆ
  • ಕರ್ನಾಟಕದಲ್ಲಿ ರಾಬ್ಸ್ ಮತ್ತು ರಬ್ಸ್ ನ ವಿವರವಾದ ಯೋಜನಾ ವರದಿ (2001)
  • ಮೇಲಿನ ಯೋಜನೆಯ ಕಾರ್ಯಸಾಧ್ಯತೆ, ಮಣ್ಣಿನ ತನಿಖೆ ಮತ್ತು ವಿನ್ಯಾಸವನ್ನು ಕೈಗೊಳ್ಳುವ ತಂಡದ ನಾಯಕ.
  • ಬೆಂಗಳೂರಿನಲ್ಲಿ ಪ್ರಯಾಣಿಕರ ರೈಲುಗಾಗಿ ಅಂತರ ಮಾದರಿ ಸಮೀಕ್ಷೆ (2000-2001)
  • ಮನೆ ಸಮೀಕ್ಷೆ ಮತ್ತು ಸಂಚಾರ ಸಮೀಕ್ಷೆಗಳು, ವ್ಯವಸ್ಥೆಯ ಯೋಜನೆ ಮತ್ತು ಅಂತರ ಮಾದರಿ ಏಕೀಕರಣ ಸೇರಿದಂತೆ ಬೆಂಗಳೂರಿಗೆ ಪ್ರಯಾಣಿಕರ ರೈಲು ವ್ಯವಸ್ಥೆಯನ್ನು ಯೋಜಿಸಲು ತಂಡದ ನಾಯಕ.
  • ಕ್ಲೈಂಟ್: ಎಂಟಿಪಿ (ಆರ್), ಚೆನ್ನೈ.
  • ದೆಹಲಿಯಲ್ಲಿ ಇಂಟರ್ಚೇಂಜ್ಗಳ ಯೋಜನೆ ಮತ್ತು ವಿನ್ಯಾಸ (1998: 99);
  • ದೆಹಲಿ ನಗರ ಪ್ರದೇಶದಲ್ಲಿ 18 ಫ್ಲೈಓವರ್ ಗಳು ಮತ್ತು ಇಂಟರ್ ಚೇಂಜ್ ಗಳ ಟೆಂಡರ್ ದಾಖಲೆಗಳು ಮತ್ತು ಬಿಒಕ್ಯೂನ ಯೋಜನೆ ಮತ್ತು ವಿನ್ಯಾಸ ಮತ್ತು ತಯಾರಿಕೆಗಾಗಿ ತಂಡದ ನಾಯಕ.  ನಿರ್ಮಾಣದ ಸಮಯದಲ್ಲಿ ಟೆಂಡರ್ ದಾಖಲೆ ತಯಾರಿಕೆ ಮತ್ತು ತಾಂತ್ರಿಕ ಬೆಂಬಲದಲ್ಲಿ ತೊಡಗಿಸಿಕೊಂಡಿದ್ದಾರೆ .
  •  ಜಮ್ಮು ಪ್ರದೇಶದ ಪ್ರಾದೇಶಿಕ ಸಾರಿಗೆ ಅಧ್ಯಯನ (1993-94)
  • ಸಂಚಾರ ಸಮೀಕ್ಷೆ, ಸಾರಿಗೆ ಬೇಡಿಕೆ ಮಾಡೆಲಿಂಗ್ ಮತ್ತು ರಸ್ತೆ ಜಾಲ ಯೋಜನೆ ಮತ್ತು ವಿನ್ಯಾಸವನ್ನು ನಡೆಸಲು ಇವರು ಕೋರ್ ತಂಡದ ಸದಸ್ಯರಾಗಿದ್ದಾರೆ .
  • ಲಡಾಖ್ ಪ್ರದೇಶದ ಪ್ರಾದೇಶಿಕ ಸಾರಿಗೆ ಅಧ್ಯಯನ (1992-93)
  • ಸಾರಿಗೆ ಬೇಡಿಕೆ ಪ್ರೊಜೆಕ್ಷನ್ ಗಳಲ್ಲಿ ಭಾಗಿಯಾಗಿರುವ ಕೋರ್ ತಂಡದ ಸದಸ್ಯ. ರಸ್ತೆ ಜಾಲ ವರ್ಧನೆ ಯೋಜನೆ ಮತ್ತು ವಿನ್ಯಾಸ
  • ಬೆಂಗಳೂರು ನಗರ ಸಾರಿಗೆ ಯೋಜನೆ (1989)
  • ಸಂಚಾರ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಯೋಜನೆಗಳು ಮತ್ತು ಕಾರ್ಯತಂತ್ರಗಳ ರಸ್ತೆ ಸುಧಾರಣೆಗಳ ತಯಾರಿಕೆಗಾಗಿ ಕೋರ್ ತಂಡದ ಸದಸ್ಯ. ಪ್ರದೇಶ ಸಂಚಾರ ನಿಯಂತ್ರಣಕ್ಕಾಗಿ ಟ್ರಾನ್ಸೈಟ್ ಬಳಸಿ ಟ್ರಾಫಿಕ್ ಸಿಗ್ನಲ್ ವಿನ್ಯಾಸದ ವಿನ್ಯಾಸದಲ್ಲಿ ತೊಡಗಿದೆ ಮತ್ತು ಸಿಂಕ್ರೊನೈಸೇಶನ್ ಮತ್ತು ಪ್ರತ್ಯೇಕ ಸಿಗ್ನಲ್ ವಿನ್ಯಾಸಗಳನ್ನು ಒಳಗೊಂಡ ಪ್ರಮುಖ ಕಾರಿಡಾರ್ ಗಳ ಉದ್ದಕ್ಕೂ 40 ಪ್ರಮುಖ ಜಂಕ್ಷನ್ ಗಳು. ಬೆಂಗಳೂರಿನ ಹೊರ ವರ್ತುಲ ರಸ್ತೆಗಾಗಿ ಯೋಜನೆ ಮತ್ತು ವಿವರವಾದ ಎಂಜಿನಿಯರಿಂಗ್ ಸಮೀಕ್ಷೆಗಳು. 8 ಫ್ಲೈಓವರ್ ಗಳು / ಅಂಡರ್ ಪಾಸ್ ಗಳ ಯೋಜನೆ ಮತ್ತು ವಿನ್ಯಾಸ.
  • 1986-1987- ಕನ್ಸಲ್ಟಿಂಗ್ ಎಂಜಿನಿಯರಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಸಿಇಎಸ್), ನವದೆಹಲಿ
  • ಅಹಮದಾಬಾದ್-ವಡೋದರಾ ಎಕ್ಸ್ ಪ್ರೆಸ್ ವೇಯಿಂದ ಸಂಚಾರ ಪ್ರಸರಣ (1887)
  • ವಾಹನ ಫ್ಲೀಟ್ ಆಧುನೀಕರಣ ಮತ್ತು ರಸ್ತೆ ಬಳಕೆದಾರರ ಶುಲ್ಕ ಅಧ್ಯಯನ (1988)
  • ರಾಷ್ಟ್ರೀಯ ಮಟ್ಟದಲ್ಲಿ ಸಾರಿಗೆ ಬೇಡಿಕೆ ಪ್ರಕ್ಷೇಪಣಗಳ ಕೋರ್ ತಂಡದ ಸದಸ್ಯ, ಎಚ್ ಡಿಎಂ III ಮಾದರಿಯನ್ನು ಬಳಸಿಕೊಂಡು ಪರ್ಯಾಯ ಜಾಲಗಳನ್ನು ಮೌಲ್ಯಮಾಪನ ಮಾಡುವುದು ಮತ್ತು ರಾಷ್ಟ್ರೀಯ ಎಕ್ಸ್ ಪ್ರೆಸ್ ವೇ ಜಾಲವನ್ನು ಗುರುತಿಸುವ ಮೂಲಕ ರಸ್ತೆ ಕಂಟೇನರ್ ಚಲನೆಗೆ ಯೋಜಿಸುವುದು .
  • ಬಿಎಂಆರ್ಸಿಎಲ್ ಮಾಜಿ ಎಂಡಿ
  • ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸೆಮಿನಾರ್ ಗಳಲ್ಲಿ 29 ಟೆಸಿನಿಕಲ್ ಪೇಪರ್ ಗಳನ್ನು ಪ್ರಕಟಿಸಲಾಗಿದೆ

ಅಧಿಕೃತ ಕೆಲಸದ ಮೇಲೆ ಚೀನಾ, ಜಪಾನ್, ಹಾಂಗ್ ಕಾಂಗ್, ಬ್ಯಾಂಕಾಕ್ , ಸಿಂಗಾಪುರ್, ಮಲೇಷ್ಯಾ, ಇಂಡೋನೇಷ್ಯಾ, ಸ್ವಿಟ್ಜರ್ ಲ್ಯಾಂಡ್, ಯುರೋಪ್, ದುಬೈ, ಇತ್ಯಾದಿಗಳಿಗೆ ಭೇಟಿ ನೀಡಿದರು

 

ಬಿಎಂಆರ್ಸಿಎಲ್ ಮಾಜಿ ಎಂಡಿಯಿಂದ ಪ್ರಶಂಸೆ

ಈ ಪ್ರಶಂಷೆ ಯ ಕನ್ನಡ ಅನುವಾದ :

ಶಿವಶೈಲಂ ಎನ್.

ಐಎಎಸ್ (ನಿವೃತ್ತ)

2w

72 ಕಿ.ಮೀ ಉದ್ದದ ಸಂಪೂರ್ಣ ಹಂತ 2 ಅನ್ನು ನಮ್ಮ ಮೆಟ್ರೋದ ತಾಂತ್ರಿಕ ತಂಡವು ಆಂತರಿಕವಾಗಿ ವಿನ್ಯಾಸಗೊಳಿಸಿದೆ. ಡಿಪಿಆರ್ ಸಿದ್ಧಪಡಿಸುವ ಮೊದಲು ನಾವು ಪ್ರತಿ ಮೀಟರ್ ಉದ್ದದ ಪ್ರತಿ ಮೀಟರ್ ಪ್ರಯಾಣಿಸಿದ್ದೇವೆ. ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗದಲ್ಲಿ ಬೈಪ್-ಕೆ.ಆರ್.ಪುರಂ ಶ್ರೀ ಸುಧೀರ್ ಚಂದ್ರ (ಮಾಜಿ ಸದಸ್ಯ ಆರ್ಬಿ) ಮತ್ತು ಶ್ರೀ ಎನ್.ಪಿ.ಶರ್ಮಾ ನೇತೃತ್ವದ ವಿನ್ಯಾಸ ತಂಡದ ಎಂಜಿನ್ ಅದ್ಭುತವಾಗಿದೆ. ಅಲ್ಲದೆ ವಿನ್ಯಾಸ ರಚನೆಗಳು ಪುನರುತ್ಪಾದನಾ ಸಾಮರ್ಥ್ಯದೊಂದಿಗೆ ಶಕ್ತಿಯ ಬಳಕೆಯಲ್ಲಿ ಅತ್ಯಂತ ಕಡಿಮೆಯಾಗಿದೆ, ಇದು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ, ಇದು ರೈಲುಗಳ ಆವರ್ತನವನ್ನು ಹೆಚ್ಚಿಸುವುದರೊಂದಿಗೆ ಹೆಚ್ಚಾಗುತ್ತದೆ

ಪುನರುತ್ಪಾದಕ ಶಕ್ತಿಯನ್ನು ಕನಿಷ್ಠ ಚದುರುವಿಕೆಯೊಂದಿಗೆ ಉತ್ತಮವಾಗಿ ಬಳಸಿಕೊಳ್ಳಲಾಗುತ್ತದೆ. ಹಂತ 1 ರಲ್ಲಿ ಪ್ರಾರಂಭವಾದ ಈ ವಿನ್ಯಾಸಗಳನ್ನು ಹಂತ 2 ರಲ್ಲಿ ಹೆಚ್ಚಿನ ಹುರುಪಿನಿಂದ ಮುಂದುವರಿಸಲಾಗಿದೆ. ಮೆಟ್ರೋದಲ್ಲಿ ಸಾಕಷ್ಟು ಉತ್ತಮ ತಾಂತ್ರಿಕ ವಿಷಯಗಳು ಎಂಜಿನಿಯರ್ ಗೆ ಸಂತೋಷವನ್ನು ನೀಡುತ್ತವೆ.

ಇವರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸೆಮಿನಾರ್ ಗಳು / ಸಮ್ಮೇಳನಗಳಲ್ಲಿ 29 ತಾಂತ್ರಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ 

 

ಬೆಂಗಳೂರು ಮೆಟ್ರೋದ ಮುಂದಿನ ಪ್ಲಾನ್ ಗಳು :

  •  ಹಂತ 3 ಮತ್ತು ಹಂತ 4: ಮಾರ್ಗಗಳು
  • 2ನೇ ಹಂತದಲ್ಲಿ ಆರ್.ವಿ.ರಸ್ತೆ ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ನಿಂದ ವಿಮಾನ ನಿಲ್ದಾಣದವರೆಗೆ 2 ವರ್ಷಗಳಲ್ಲಿ ನಿರ್ಮಿಸಿ ಮುಕ್ತಗೊಳಿಸಲಾಗಿದೆ
  • 3ನೇ ಹಂತದಲ್ಲಿ ಪೀಣ್ಯದಿಂದ ಜೆ.ಪಿ.ನಗರ, ಟೋಲ್ ಗೇಟ್ ನಿಂದ ಪಿಆರ್ ಆರ್ ನಿಂದ ಮಾಗಡಿ ರಸ್ತೆ ಸಂಪರ್ಕ ಕಲ್ಪಿಸಲಾಗುವುದು
  • ನಮ್ಮ ಮೆಟ್ರೋ 4 ನೇ ಹಂತದಲ್ಲಿ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ಜಾಲಕ್ಕೆ 129 ಕಿ.ಮೀ ಉದ್ದದ ಮಾರ್ಗಗಳನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ.
  • ಬಿಡದಿ (ಮೈಸೂರು ರಸ್ತೆ), ಹಾರೋಹಳ್ಳಿ (ಕನಕಪುರ ರಸ್ತೆ), ಅತ್ತಿಬೆಲೆ (ಹೊಸೂರು ರಸ್ತೆ) ಮತ್ತು ಕುಣಿಗಲ್ ಕ್ರಾಸ್ (ನೆಲಮಂಗಲ ಬಳಿಯ ತುಮಕೂರು ರಸ್ತೆ) ಎಂಬ ನಾಲ್ಕು ದಿಕ್ಕುಗಳಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳನ್ನು ಸಂಪರ್ಕಿಸುವ ಹೊಸ ಅರೆ ವೃತ್ತಾಕಾರದ ಮಾರ್ಗದ ಮೂಲಕ ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಗುರಿಯನ್ನು ವಿಸ್ತರಣೆ ಹೊಂದಿದೆ.
  • ಪ್ರಸ್ತಾವಿತ ಅರೆ ವರ್ತುಲ ಮೆಟ್ರೋ ಮಾರ್ಗವು ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ ಮತ್ತು ವರ್ತೂರು ಪ್ರದೇಶಗಳನ್ನು ಸಂಪರ್ಕಿಸುತ್ತದೆ.
  • ಎಂಜಿ ರಸ್ತೆ ಮೆಟ್ರೋ ನಿಲ್ದಾಣ
  • ಫ್ಲೈಓವರ್ ಕಮ್ ಮೆಟ್ರೋ ಆರ್ ವಿ ರಸ್ತೆಯಿಂದ ಸಿಲ್ಕ್ ಬೋರ್ಡ್ ವರೆಗೆ

ನಮ್ಮ ಪ್ರಶ್ನೆ 

 

ಅವರ ಉತ್ತರ :

 ಈ ಉತ್ತರ ಕೇಳಿ , ಗೆಳೆಯರಿಗೆಲ್ಲಾ ಆಶ್ಚರ್ಯ ಮತ್ತು ಸಂತಸ ಆಯಿತು 

 ಇಂತಹ ಮಹಾನ್ ವ್ಯಕ್ತಿ ನನ್ನ ಗೆಳೆಯ ಎಂಬುದೇ ನನ್ನ ಹೆಮ್ಮೆ 

ಕಥೆ

ಮಕ್ಕಳ ಶಿಕ್ಷಣ - ಡಾ || ಎ ಎಸ್ ಚಂದ್ರಶೇಖರ ರಾವ್

[dflip id="336"][/dflip]

ಮುದ್ದು ಮಕ್ಕಳ ಮುಗ್ಧ ಮನ- ಭಾಗ -9

"ವ"ಕೊಂಬು ಏನು?

ಸುಮಾರು 67 ವರ್ಷಗಳ ಹಿಂದೆ ನಾನು ಮೈಸೂರಿ ನಲ್ಲಿ M.B.B.S ಓದುತ್ತಿದ್ದಾಗ, ನಮ್ಮ ಸೋದರ ಮಾವನ ಮನೆಯಲ್ಲಿದ್ದೆ. ಅವರ ಕೊನೆ ಮಗು (ಪುಟ್ಟ ರಾಜಿ) - 5-6 ವರ್ಷ ದವಳು - ಅವಳಿಗೆ ಕನ್ನಡ ವ್ಯಾಕರಣ ಹೇಳಿ ಕೊಡುತ್ತಿದ್ದೆ. "ರ"ಕೊಂಬು ರು, "ಕ"ಕೊಂಬು ಕು, "ತ"ಕೊಂಬು ತು, ಹೀಗೆ. ಆಗ ನಾನು "ವ" ಗೆ ಕೊಂಬುಕೊಟ್ಟರೆ ಏನು ಆಗುತ್ತೆ? ಎಂದು ಕೇಳಿದಾಗ , ಅವಳು, "ವ" ಗೆ ಕೊಂಬುಕೊಟ್ಟರೆ "ಮ " ಆಗುತ್ತೆ ಎಂದು ಬರೆದು ತೋರಿಸಿದಳು! ನಾನು ಅವಳ ಮುಗ್ಧತೆಗೆ ಆಶ್ಚರ್ಯ ಪಟ್ಟು, "ವ" ಗೆ ಕೊಂಬು ಕೊಡುವುದು ಹಾಗಲ್ಲ. ಹೀಗೆ ಕೊಡಬೇಕು. "ವ" ಗೆ ಕೊಂಬುಕೊಟ್ಟರೆ "ವು" ಆಗುತ್ತೆ ಎಂದು ವಿವರಿಸಿದೆ.

ಪದರಂಗ - ಭಾಗ 1 

ಡಾ|| ಎ ಎಸ್ ಚಂದ್ರಶೇಖರ ರಾವ್ ( ಇವರು ಪ್ರತಿ ತಿಂಗಳೂ ಎರಡು ಪದರಂಗ ಕಳುಹಿಸುವರು. ಇದು ಸ್ಪರ್ಧೆಗಾಗಿ ಅಲ್ಲ ).ಸರಿ ಉತ್ತರ ಕಳುಹಿಸಿದವರ ಹೆಸರುಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. 

ಪದರಂಗ -1-   ಸುಳುಹುಗಳು 

1. ದಯೆ , ಅನುಕಂಪ. 

2. ಬೆದರು, ಗಾಬರಿಗೊಳ್ಳು . 

3. ಮಹಿಮೆ, ಮಹಾತ್ಮೆ , ವೈಭವ 

ಪದರಂಗ -2 ಸುಳುಹುಗಳು 

 1. ನಿರ್ದೇಶನ , ಉಪದೇಶ , ಶಿಕ್ಷೆ 

2. ಆಕಾಶ ಧ್ವನಿ , ಅಶರೀರ ವಾಣಿ .

3. ಕತ್ತೆ , ಗಾರ್ಧಭ 

 ಚಿತ್ರಕಲೆ

ಶ್ರೀ ಎಸ್ ವಿಠ್ಠಲ ರಾವ್ ಅವರು ರಚಿಸಿದ ಜೋಡಿ ಚಿತ್ರಕಲೆ - ಹಗಲು

ರಾತ್ರಿ 

ಶ್ರೀ ಎಸ್ ವಿಠ್ಠಲ ರಾವ್ ಅವರು ರಚಿಸಿದ ಇನ್ನೊಂದು  ಚಿತ್ರಕಲೆ

 
 
 

ಶ್ರೀ ಕೆ ವಿ ಜಯರಾಂ  ಅವರು , ಅಮೇರಿಕಾಗೆ  ಹೋಗಿ ರಚಿಸಿದ  ಚಿತ್ರಕಲೆ

ಹಾಡು

ಸುನೀತಾ ವಿಲಿಯಮ್ಸ್ ಅವರು ಮರಳಿ ಭೂಮಿಗೆ ಬಂದಾಗ , ಅವರಿಗಾಗಿ ಮಾರ್ಪಡಿಸಿದ ಹಾಡುಹಾಡಿ ಸ್ವಾಗತಿಸಿದವರು  ನನ್ನ ಗೆಳೆಯ bsk ಪ್ರಸಾದ್ ಅವರು. ಕೆಳಗಿನ ಲಿಂಕ್ ಒತ್ತಿ ಹಾಡು ಕೇಳಿ.

 

ಲೇಖನ,ಚುಟುಕ ಇತ್ಯಾದಿ

ಚಿಂತನ ಚುಟುಕಗಳು - ಶ್ರೀ ಎಸ್ ಸುರೇಶ್

🌿 ಹೂವಿಗೆ ಪರಿಮಳ, ನದಿಗೆ ಹರಿವು, ಮನುಷ್ಯನಿಗೆ ಕರ್ಮವೇ ಜೀವನದ ಸೊಗಸು 🙏

🌞 ಬೆಳಕಿಲ್ಲದ ಹಾದಿ ತುಸು ಕತ್ತಲಾದರೂ, ಸಂತೋಷವೆಂಬ ದೀಪವಿದ್ದರೆ ದಾರಿ ದಿವ್ಯವಾಗುತ್ತದೆ🕯️

🍃 ಗಾಳಿ ಬೀಸಿದರೂ, ಮರ ನಿಂತೇ ಇರುವುದು, ಬಿರುಗಾಳಿ ಬಂದರೂ, ಶಿಖರ ತಲೆಯೆತ್ತುವುದು💪

🌊 ನದಿ ಹರಿಯುವ ಬಗೆ ಬದುಕಿನ ಪಾಠ ಕಲಿಸುತ್ತದೆ, ಅಡೆತಡೆಗಳೊಡನೆ ಹೆಜ್ಜೆ ಹಾಕುವುದೇ ಜ್ಞಾನ 🎓

ವಿಶ್ವ ಗುಬ್ಬಚ್ಚಿ ದಿನ ಮಾರ್ಚ್ 20.(World Sparrow Day) – ಮಹತ್ವ ಹಾಗೂ ಸಂರಕ್ಷಣೆಯ ಅಗತ್ಯತೆ

ಶ್ರೀ ಎಸ್ ಸುರೇಶ್ 

🔹 ದಿನದ ಮಹತ್ವ:

ವಿಶ್ವ ಗುಬ್ಬಚ್ಚಿ ದಿನವನ್ನು ಪ್ರತಿ ವರ್ಷ ಮಾರ್ಚ್ 20ರಂದು ಆಚರಿಸಲಾಗುತ್ತದೆ. ಈ ದಿನವನ್ನು 2010ರಲ್ಲಿ Nature Forever Society ಮತ್ತು ಇತರ ಪರಿಸರ ಸಂರಕ್ಷಣಾ ಸಂಸ್ಥೆಗಳ ಸಹಯೋಗದಿಂದ ಪ್ರಾರಂಭಿಸಲಾಯಿತು. ಇದರಿಂದ ಗುಬ್ಬಚ್ಚಿಗಳ ಮಹತ್ವ, ಅವರ ಸಂಖ್ಯೆಯಲ್ಲಿ ತೀವ್ರ ಕುಸಿತ, ಹಾಗೂ ಅವರ ಸಂರಕ್ಷಣೆಯ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಿದೆ.

🔹 ಗುಬ್ಬಚ್ಚಿಗಳ ಹಿನ್ನೋಟ:

ಒಮ್ಮೆ ನಮ್ಮ ಮನೆಗಳ ಸುತ್ತಮುತ್ತಲಿನ ಪ್ರಮುಖ ಅಂಶವಾಗಿದ್ದ ಗುಬ್ಬಚ್ಚಿಗಳು (House Sparrow – Passer domesticus) ಈಗ ಪರಿಸರದಲ್ಲಿ ಕಡಿಮೆಯಾಗುತ್ತಿವೆ. ಕೃಷಿ ತಂತ್ರಜ್ಞಾನ, ಕೀಟನಾಶಕಗಳ ಬಳಕೆ, ಅರಣ್ಯನಾಶ, ಮತ್ತು ನಗರೀಕರಣದ ಪರಿಣಾಮವಾಗಿ ಈ ಚಿಕ್ಕ ಪಕ್ಷಿಗಳು ಬದುಕಲು ಸೂಕ್ತ ಸ್ಥಳವನ್ನು ಕಳೆದುಕೊಳ್ಳುತ್ತಿವೆ.

🔹 ಗುಬ್ಬಚ್ಚಿಗಳನ್ನು ಸಂರಕ್ಷಿಸಲು ನಾವು ಏನು ಮಾಡಬೇಕು?

ಪರಿಸರ ಸ್ನೇಹಿ ಜೀವನಶೈಲಿ:

ಹೆಚ್ಚು ಗಿಡಗಳನ್ನು ನೆಟ್ಟು, ಹಣ್ಣು ಮತ್ತು ಬೀಜಗಳು ದೊರಕುವ ಮರಗಳನ್ನು ಬೆಳೆಸಿ. ಪರಿಸರಸ್ನೇಹಿ ಹಾವಳಿ ನಿಯಂತ್ರಣ ಕ್ರಮಗಳನ್ನು ಅನುಸರಿಸಿ, ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ.

ನಿವಾಸ ಒದಗಿಸುವುದು:

ಮನೆಯ ಸುತ್ತ ಗುಬ್ಬಚ್ಚಿಗಳಿಗೆ ಗೂಡು ಹಾಕಲು ಅನುಕೂಲ ಕಲ್ಪಿಸಬೇಕು. ಚಿಕ್ಕ ಬಾಳೆಬೋಲೆ ಅಥವಾ ಮರದ ಕೊಂಬೆಗಳ ಮೇಲೆ ಹಳೆಯ ಪೆಟ್ಟಿಗೆಗಳನ್ನು ಇರಿಸಿ, ಗುಬ್ಬಚ್ಚಿಗಳಿಗೆ ಆಶ್ರಯ ನೀಡಬಹುದು.

ನೀರಿನ ವ್ಯವಸ್ಥೆ:

ಬೇಸಿಗೆಯ ಸಮಯದಲ್ಲಿ ಹಕ್ಕಿಗಳಿಗಾಗಿ ಕುಡಿಯುವ ನೀರಿನ ಬೌಲ್ ಅಥವಾ ಪುಟ್ಟ ಕುಂಡಿಗಳನ್ನು ಇರಿಸಿ.

ಜಾಗೃತಿ ಮೂಡಿಸುವುದು:

ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಗುಬ್ಬಚ್ಚಿಗಳ ಮಹತ್ವ ಹಾಗೂ ಅವರ ಸಂರಕ್ಷಣೆಯ ಅಗತ್ಯತೆ ಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುವುದು. "Save the Sparrows" ಹಕ್ಕಿ ಕಣ್ಮಣಿಗಳನ್ನು ಉಳಿಸೋಣ ಎಂಬ ಅಭಿಯಾನಗಳನ್ನು ಪ್ರೋತ್ಸಾಹಿಸುವುದು. 📢 ನಾವು ಇಂದು ಚಿಕ್ಕ ಹೆಜ್ಜೆ ಹಾಕಿದರೆ, ನಾಳೆಯ ಪೀಳಿಗೆಗೆ ಗುಬ್ಬಚ್ಚಿಗಳ ಗುನುಗುನು ಕೇಳಲು ಸಾಧ್ಯ "ಪರಿಸರ ಉಳಿಸುವುದು ನಮ್ಮ ಜವಾಬ್ದಾರಿ – ಗುಬ್ಬಚ್ಚಿಗಳನ್ನು ಕಾಪಾಡೋಣ, ಪ್ರಕೃತಿಯನ್ನು ರಕ್ಷಿಸೋಣ" 🌍💚🐦

ಬಡಾವಣೆ ಹಾಗೂ ಇತರ ಸುದ್ದಿಗಳು 

ರಾಮೋತ್ಸವ 

ನಮ್ಮ ಬಡಾವಣೆಯ 2025 ನೇ ಸಾಲಿನ ರಾಮೋತ್ಸವವನ್ನು ಏಪ್ರಿಲ್ 20, 2025 ರಂದು ಆಚಾರಿಸುತ್ತೇವೆ. ಸ ರೆ ಗ ಮ ಪ ದ ಪ್ರಸಿದ್ದ ಜ್ಯೂರಿ ಸದಸ್ಯೆ ಶ್ರೀಮತಿ ಶ್ವೇತ ಪ್ರಭು ಅವರಿಂದ ಹಾಡುಗಾರಿಕೆ. 

ಸಂಜೆ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ . ಸಂಜೆಗೆ ಮುಖ್ಯ ಅತಿಥಿ: ಪ್ರಸಿದ್ದ ಗಾಯಕ  ಶ್ರೀ ಶಶಿಧರ ಕೋಟೆ .

ಅತ್ತಿಗುಪ್ಪೆ ಶ್ರೀ ನರಸಿಂಹ ಸ್ವಾಮಿ ರಥೋತ್ಸವ 

[embed]https://youtube.com/shorts/g8eiq1BVJz4?feature=share[/embed]                                                                    

ಮಲ್ಲಿಗೆರೆ ಶ್ರೀ ಕರಿಯಮ್ಮ ದೇವಿ ಜಾತ್ರೆ 

[embed]https://youtube.com/shorts/4aWdg4HtaZg?feature=share[/embed]                                                              

ನಮ್ಮ ಬಡಾವಣೆಯ ಶ್ರೀ ಸುಬ್ಬಣ್ಣ ಆರಾಧ್ಯ ದಂಪತಿಗಳಿಗೆ  ಸನ್ಮಾನ 

ವಿಡಿಯಾ ಬಡಾವಣೆಯ ಶ್ರೀ ಪ್ರಸಣ್ಣಗಣಪತಿ ದೇವಸ್ಥಾನದ ರಥಕ್ಕೆ ಧನ  ಸಹಾಯ ಮಾಡಿದ ಶ್ರೀ ಸುಬ್ಬಣ್ಣ ಆರಾಧ್ಯ ದಂಪತಿಗಳಿಗೆ  , ದೇವಸ್ಥಾನದಲ್ಲಿ ಸನ್ಮಾನ ಮಾಡಲಾಯಿತು.

ನಮ್ಮ ಬಡಾವಣೆಯ ಸಂಘದ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಶೆಟ್ಟಿ  ದಂಪತಿಗಳಿಗೆ  ಸನ್ಮಾನ 

ವಿಡಿಯಾ ಬಡಾವಣೆಯ ಶ್ರೀ ಪ್ರಸಣ್ಣಗಣಪತಿ ದೇವಸ್ಥಾನದಕ್ಕೆ ವೇದಿಕೆಯನ್ನು ದಾನ ನೀಡಿದ್ದಕ್ಕಾಗಿ , ನಮ್ಮ ಬಡಾವಣೆಯ ಸಂಘದ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಶೆಟ್ಟಿ  ದಂಪತಿಗಳಿಗೆ   , ದೇವಸ್ಥಾನದಲ್ಲಿ ಸನ್ಮಾನ ಮಾಡಲಾಯಿತು.

                                                           

ನಿಮ್ಮ ಪ್ರತಿಕ್ರಿಯೆಗಳು 

[dflip id="271"][/dflip]

Comments

Popular posts from this blog

ಪ್ರತಿಭಾ ಪತ್ರಿಕೆ - ಡಿಸಂಬರ್ 2024

Magazine for talents - December 2024

ಸೆಪ್ಟಂಬರ್ 2025- ಪ್ರತಿಭಾ ಪತ್ರಿಕೆ